ಸರಿಯಾಗಿ ಎಣ್ಣೆ ಹಾಕಿ ಬಿಗಿಯಾಗಿ ಹೆಣೆದ ಎರಡು ಮೋಟು ಜಡೆಗಳನ್ನು ಹೆಗಲ ಮೆಲೆ ಹಾಕಿಕೊಂಡು ಶಾಲೆಗೆ ಬಂದ ಶಾರಿ ದಿನದಂತೆ ಬಂದು ನನ್ನ ಮಾತಾಡಿಸದಿದ್ದಗಲೇ ನನಗೆ ಅರ್ಥವಾಗಿತ್ತು ಅವಳು ಅವತ್ತು ನೆಲ್ಲಿಕಾಯಿ ತಂದಿಲ್ಲ ಅಂತ. ಎಲ್ಲಿಗೆ ಹೋಗ್ತಾಳೆ ನನ್ನ ಬೆಂಚಿಗೆ ತಾನೇ ಬಂದು ಕೂತ್ಕೋಬೇಕು ಅಂತ ಯೋಚನೆ ಮಾಡಿ ನಾನೂ ಸುಮ್ನೆ ಆದೆ. ಸ್ವಾಮಿ ದೇವನೇ, ಜೈ ಭಾರತ ಜನನಿಯ, ಜನಗಣಮನ ಎಲ್ಲಾ ಮುಗಿದು ಕಸ ಹೆಕ್ಕಿ, ಒಳಗೆ ಬಂದು ಕುಳಿತರೂ ಇವಳ ಸುಳಿವೇ ಇಲ್ಲ. ನನ್ಗೆ ಕಾದು,ಕಾದು ಸುಸ್ತಾಯ್ತು. ನೊಡಿದ್ರೆ ಕೊನೆ ಬೆಂಚಿನ ಲತಾನ ಜೊತೆ ಹೊಗಿ ಕೂತಿದ್ಲು.
ನನಗೆ ಬೇಸರವಾಗತೊಡಗಿತ್ತು. ನನ್ನ ಮಾವ ಪೇಟೆಯಿಂದ ತಂದುಕೊಟ್ಟ ನನ್ನ ಹೊಸ ಪೆನ್ನನ್ನು ಶಾರಿ ಮನೆಯ ಖಾರ ನೆಲ್ಲಿಕಾಯಿಯ ಆಸೆಗೆ ಕೊಟ್ಟುಬಿಟ್ಟಿದ್ದೆ. ಶಾರಿ ನನ್ನ ಶಾಲೆಯ ಗೆಳತಿ. ಅಂಗನವಾಡಿಯಿಂದ ಮೂರನೇ ಕ್ಲಾಸಿನವರೆಗೂ ನಮ್ಮಿಬ್ಬರದು ಒಂದೇ ಬೆಂಚು.
ನಾನು ಅಷ್ಟು ಸರ್ವೆ ಮಾಡಿ, ಅವಳ ಕಡೆಗೆ ಒಂದು ಸಿಟ್ಟಿನ ನೋಟ ಬೀರುವಷ್ಟರಲ್ಲಿ ಶಾಂತು ಸರ್ ಒಳಗೆ ಬಂದಾಗಿತ್ತು. ಅವರು ಒಳಗೆ ಬಂದವರೇ "ಇವತ್ತು ಹೆಡ್ ಮಾಷ್ಟ್ರು ಮೀಟಿಂಗ್ ಕರೆದಿದ್ದಾರೆ. ಪಕ್ಕದ ಶಾಲೆಯವರೆಲ್ಲಾ ಬರುತ್ತಾರೆ. ಎಲ್ಲ ಕೂತು ೫ರಿಂದ ೨೦ರ ವರೆಗೆ ಮಗ್ಗಿ ಬರೀರಿ. ರಾಮು, ಶಾರಿ ಇಬ್ರೂ ಇಲ್ಲಿ ಬನ್ನಿ, ಮಾತಾಡಿದವರ ಹೆಸ್ರು ಬೋರ್ಡ್ ಮೇಲೆ ಬರೆದಿಡಿ " ಅಂತ ನಂಗೆ ಅವಳಿಗೆ ಜವಾಬ್ದಾರಿ ಹೊರೆಸಿ ಹೊರಟರು.
ನಾನು ಸೀದಾ ಶಾರಿ ಕುಳಿತ ಕಡೆಗೆ ಹೋಗಿ ಅವಳ ಹತ್ರ ಜಗಳ ಶುರು ಮಾಡಿದೆ. "ನೀನು ನೆಲ್ಲಿಕಾಯಿ ಎರಡು ದಿನ ಆದ್ರೂತಂದ್ಕೊಡ್ಲಿಲ್ಲ.. ನಾನು ನಿನ್ಗೆ ಮೊನ್ನೆ ಕೊಟ್ಟಿದ್ದ ಪೆನ್ ವಾಪಸ್ ಕೊಡು." ಶಾರಿ ಏನು ಕಡಿಮೆಯೇ? "ರಾಮು ನೀನು ಅವತ್ತು ನಂದು ನಾಲ್ಕು ಬಸ್ ಟಿಕೆಟ್ ತಗೊಂಡಿದ್ದೆ. ಅದು ಪೆನ್ನಿಗೆ ಸರಿ ಆಯ್ತು, ನಾನೇನು ನಿನ್ಗೆ ನೆಲ್ಲಿಕಾಯಿ ಕೊಡ್ಬೆಕು ಅಂತಿಲ್ಲ" ಅಂದಳು.
ಶಾರಿಯದೊಂದು ಹವ್ಯಾಸ. ಬಸ್ ಟಿಕೆಟ್ ಕೂಡಿಸುವುದು. ಸರಿಯಾಗಿ ನಾಲ್ಕು ಪ್ಲಾಸ್ಟಿಕ್ ಕೊಟ್ಟೆ ತುಂಬಾ ಟಿಕೆಟ್ ಇತ್ತು ಅವಳ ಹತ್ತಿರ. ಅದನ್ನ ಯಾರು ಮುಟ್ಟಿದ್ರೂ ಸಿಟ್ಟು.ಅವತ್ತು ಸುಮ್ನೆ ಅದ್ರಲ್ಲಿದ್ದ ಟಿಕೆಟ್ ಮಜಕ್ಕೆ ಎತ್ಕೊಂಡ್ರೆ ಇವಳು ಇದೇನು ಮಾಡ್ತಿದಾಳೆ ಅನ್ನಿಸಿ ನನಗೆ ಕೋಪ ಉಕ್ಕಿ ಬಂದು ಜೊರಾಗಿ ಒಂದು ಬಾರಿಸಿದೆ.
ಶಾರಿ ಜೊರಾಗಿ ಅಳಲು ಶುರು ಮಾಡಿದ್ಲು.
ಪಕ್ಕದ ಹೆಡ್ ಮಾಷ್ಟ್ರ ರೂಮಿನಲ್ಲಿದ್ದ ಶಾಂತು ಸರ್ ಬಂದು ಅವಳನ್ನ ವಿಚಾರಿಸಿ, ನನಗೆ ಜೊರಾಗಿ ಅಂಗೈ ಮೇಲೊಂದು ಬಾರಿಸಿದಾಗ ಶಾರಿಯ ಮುಖವೂ ಬಾಡಿತ್ತು.
ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಇಡೀ ನೆಲ್ಲಿಕಾಯಿ ಕೊಟ್ಟೆನೇ ನನ್ನ ಕೈಗೆ ಶಾರಿ ತಂದುಕೊಟ್ಟು "ತುಂಬಾ ನೋವಾಯ್ತಾ?" ಅಂದಾಗ ನನಗೆ ನನ್ನ ಹೊಸ ಪೆನ್ನು ಅಂಗೈ ಉರಿ ಎಲ್ಲ ಮರೆತು, ನೆಲ್ಲಿಕಾಯಿಯ ಸವಿಯೇ ಮನ ತುಂಬತೊಡಗಿತ್ತು..
ನನಗೆ ಬೇಸರವಾಗತೊಡಗಿತ್ತು. ನನ್ನ ಮಾವ ಪೇಟೆಯಿಂದ ತಂದುಕೊಟ್ಟ ನನ್ನ ಹೊಸ ಪೆನ್ನನ್ನು ಶಾರಿ ಮನೆಯ ಖಾರ ನೆಲ್ಲಿಕಾಯಿಯ ಆಸೆಗೆ ಕೊಟ್ಟುಬಿಟ್ಟಿದ್ದೆ. ಶಾರಿ ನನ್ನ ಶಾಲೆಯ ಗೆಳತಿ. ಅಂಗನವಾಡಿಯಿಂದ ಮೂರನೇ ಕ್ಲಾಸಿನವರೆಗೂ ನಮ್ಮಿಬ್ಬರದು ಒಂದೇ ಬೆಂಚು.
ನಾನು ಅಷ್ಟು ಸರ್ವೆ ಮಾಡಿ, ಅವಳ ಕಡೆಗೆ ಒಂದು ಸಿಟ್ಟಿನ ನೋಟ ಬೀರುವಷ್ಟರಲ್ಲಿ ಶಾಂತು ಸರ್ ಒಳಗೆ ಬಂದಾಗಿತ್ತು. ಅವರು ಒಳಗೆ ಬಂದವರೇ "ಇವತ್ತು ಹೆಡ್ ಮಾಷ್ಟ್ರು ಮೀಟಿಂಗ್ ಕರೆದಿದ್ದಾರೆ. ಪಕ್ಕದ ಶಾಲೆಯವರೆಲ್ಲಾ ಬರುತ್ತಾರೆ. ಎಲ್ಲ ಕೂತು ೫ರಿಂದ ೨೦ರ ವರೆಗೆ ಮಗ್ಗಿ ಬರೀರಿ. ರಾಮು, ಶಾರಿ ಇಬ್ರೂ ಇಲ್ಲಿ ಬನ್ನಿ, ಮಾತಾಡಿದವರ ಹೆಸ್ರು ಬೋರ್ಡ್ ಮೇಲೆ ಬರೆದಿಡಿ " ಅಂತ ನಂಗೆ ಅವಳಿಗೆ ಜವಾಬ್ದಾರಿ ಹೊರೆಸಿ ಹೊರಟರು.
ನಾನು ಸೀದಾ ಶಾರಿ ಕುಳಿತ ಕಡೆಗೆ ಹೋಗಿ ಅವಳ ಹತ್ರ ಜಗಳ ಶುರು ಮಾಡಿದೆ. "ನೀನು ನೆಲ್ಲಿಕಾಯಿ ಎರಡು ದಿನ ಆದ್ರೂತಂದ್ಕೊಡ್ಲಿಲ್ಲ.. ನಾನು ನಿನ್ಗೆ ಮೊನ್ನೆ ಕೊಟ್ಟಿದ್ದ ಪೆನ್ ವಾಪಸ್ ಕೊಡು." ಶಾರಿ ಏನು ಕಡಿಮೆಯೇ? "ರಾಮು ನೀನು ಅವತ್ತು ನಂದು ನಾಲ್ಕು ಬಸ್ ಟಿಕೆಟ್ ತಗೊಂಡಿದ್ದೆ. ಅದು ಪೆನ್ನಿಗೆ ಸರಿ ಆಯ್ತು, ನಾನೇನು ನಿನ್ಗೆ ನೆಲ್ಲಿಕಾಯಿ ಕೊಡ್ಬೆಕು ಅಂತಿಲ್ಲ" ಅಂದಳು.
ಶಾರಿಯದೊಂದು ಹವ್ಯಾಸ. ಬಸ್ ಟಿಕೆಟ್ ಕೂಡಿಸುವುದು. ಸರಿಯಾಗಿ ನಾಲ್ಕು ಪ್ಲಾಸ್ಟಿಕ್ ಕೊಟ್ಟೆ ತುಂಬಾ ಟಿಕೆಟ್ ಇತ್ತು ಅವಳ ಹತ್ತಿರ. ಅದನ್ನ ಯಾರು ಮುಟ್ಟಿದ್ರೂ ಸಿಟ್ಟು.ಅವತ್ತು ಸುಮ್ನೆ ಅದ್ರಲ್ಲಿದ್ದ ಟಿಕೆಟ್ ಮಜಕ್ಕೆ ಎತ್ಕೊಂಡ್ರೆ ಇವಳು ಇದೇನು ಮಾಡ್ತಿದಾಳೆ ಅನ್ನಿಸಿ ನನಗೆ ಕೋಪ ಉಕ್ಕಿ ಬಂದು ಜೊರಾಗಿ ಒಂದು ಬಾರಿಸಿದೆ.
ಶಾರಿ ಜೊರಾಗಿ ಅಳಲು ಶುರು ಮಾಡಿದ್ಲು.
ಪಕ್ಕದ ಹೆಡ್ ಮಾಷ್ಟ್ರ ರೂಮಿನಲ್ಲಿದ್ದ ಶಾಂತು ಸರ್ ಬಂದು ಅವಳನ್ನ ವಿಚಾರಿಸಿ, ನನಗೆ ಜೊರಾಗಿ ಅಂಗೈ ಮೇಲೊಂದು ಬಾರಿಸಿದಾಗ ಶಾರಿಯ ಮುಖವೂ ಬಾಡಿತ್ತು.
ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಇಡೀ ನೆಲ್ಲಿಕಾಯಿ ಕೊಟ್ಟೆನೇ ನನ್ನ ಕೈಗೆ ಶಾರಿ ತಂದುಕೊಟ್ಟು "ತುಂಬಾ ನೋವಾಯ್ತಾ?" ಅಂದಾಗ ನನಗೆ ನನ್ನ ಹೊಸ ಪೆನ್ನು ಅಂಗೈ ಉರಿ ಎಲ್ಲ ಮರೆತು, ನೆಲ್ಲಿಕಾಯಿಯ ಸವಿಯೇ ಮನ ತುಂಬತೊಡಗಿತ್ತು..